ಬಾಗಲಕೋಟೆ: ಮದುವೆಗೆ ಹೊರಟಿದ್ದ ಕ್ರೂಷರ್ ಖಾಸಗಿ ಸ್ಲೀಪರ್ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಘಟನೆ ಮಹಾರಾಷ್ಟ್ರದ ಜತ್ತ ಸಮೀಪ ನಡೆದಿದೆ. ಅಪಘಾತದಲ್ಲಿ ಕ್ರೂಷರ್‌ನಲ್ಲಿದ್ದ ನಾಲ್ವರು ಸಾವನ್ನಪ್ಪಿದರೆ, 10 ಜನರಿಗೆ ಗಾಯವಾಗಿದೆ.
ನಿನ್ನೆ ರಾತ್ರಿ ನಡೆದ ಘಟನೆ ಇದಾಗಿದೆ. ಮೃತರಲ್ಲಿ ನಾಲ್ವರಲ್ಲಿ ಮೂವರು ಬಾಗಲಕೋಟೆ ಜಿಲ್ಲೆಯವರು. ಒಬ್ಬರು ವಿಜಯಪುರ ಜಿಲ್ಲೆಯವರು. ಜಮಖಂಡಿ ತಾಲ್ಲೂಕಿನ ರೆಹಮತ್ಪೂರ ಗ್ರಾಮದ ಭಾಗ್ಯಶ್ರೀ ಅಂಬೇಕರ್ (17), ಅಡಿಹುಡಿ ಗ್ರಾಮದ ಉಜ್ವಲಾ ಶಿಂಧೆ (21), ಲೋಕಾಪುರ ನಿವೇದಿತಾ (20) ವಿಜಯಪುರ ಜಿಲ್ಲೆ ಕಣಮಡಿ ಗ್ರಾಮದ ಅನುಸೂಯಾ ಮೃತರೆಂದು ಗುರುತಿಸಲಾಗಿದೆ. ಕ್ರೂಷರ್​ನಲ್ಲಿದ್ದವರು ಮಹಾರಾಷ್ಟ್ರದ ಜತ್ತ ಬಳಿ ಮದುವೆಗೆ ಹೊರಟಿದ್ದರು. ಈ ವೇಳೆ ಖಾಸಗಿ ಸ್ಲೀಪರ್ ಬಸ್ಸಿಗೆ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ಮಿರಜ್ ಹಾಸ್ಪಿಟಲ್ ಗೆ ದಾಖಲಿಸಲಾಗಿದೆ.