ಗೋಳಿಯಂಗಡಿ: ಹಿಲಿಯಾಣದಲ್ಲಿ 400 ವರ್ಷಗಳಿಗೂ ಮಿಕ್ಕಿದ ಇತಿಹಾಸವನ್ನು ಹೊಂದಿದ ಶ್ರೀಬ್ರಹ್ಮಬೈದರ್ಕಳ ಗರೋಡಿಯ 12 ನೇ ವರ್ಷದ ನೇಮೋತ್ಸವ,ಶಿವರಾಯನ ಕೋಲ,ಗೆಂಡಸೇವೆ ಇತ್ತೀಚೆಗೆ ಸಂಪನ್ನಗೊಂಡಿದೆ.

ನೇಮೋತ್ಸವದ ಪ್ರಯುಕ್ತ ಅಗಲು ಸೇವೆ,
ಮಹಾಪೂಜೆ, ಪ್ರಸಾದ ವಿತರಣೆ, ಹಿಲಿಯಾಣ ಎಜಿನಮನೆ ಕವಿತಾ ಉಮೇಶ್ ಶೆಟ್ಟಿ ಇವರಿಂದ ಮಹಾ ಅನ್ನಸಂತರ್ಪಣೆ ಸೇವೆ,ಸಂಜೆ ಶ್ರೀ ಬ್ರಹ್ಮ ಬೈದರ್ಕಳ ನೇಮೋತ್ಸವ,ರಾತ್ರಿ ಹಿಲಿಯಾಣ ಗರಡಿಮನೆ
ಕುಸುಮ ರಾಮ ಪೂಜಾರಿ ಕೆದೂರು, ಪ್ರೇಮ ಪ್ರಭಾಕರ ಪೂಜಾರಿ ಬೆಳಗಾಂ, ಯಶೋದಾ ಶಂಕರ ಪೂಜಾರಿ ಸಾಗರ ಇವರಿಂದ ಮಹಾ ಅನ್ನಸಂತರ್ಪಣೆ ಸೇವೆ,
ಶಿವರಾಯನ ಕೋಲಸೇವೆ, ದರ್ಶನ,
ಶಿವರಾಯನ ಗೆಂಡಸೇವೆ, ಪರಿವಾರ
ದೈವಗಳ ಕೋಲ, ಇನ್ನಿತರ ಸೇವೆಗಳು, ಗುರುವಾರ ನಾಲ್ಕು ಗ್ರಾಮದವರಿಂದ ಮಹಾಮಾರಿ ಸೇವೆ ನಡೆಯಿತು.
ಗರೋಡಿ ಗೌರವಾಧ್ಯಕ್ಷ ವೇ.ಮೂ. ಹಳ್ಳಿ ವೆಂಕಟೇಶ್ ಭಟ್,
ಮುಕ್ಕಾಲಿ ಎಚ್.ತಾರಾನಾಥ ಶೆಟ್ಟಿ ಹಿಲಿಯಾಣ,ಅಧ್ಯಕ್ಷ ವೈ
ಕರುಣಾಕರ ಶೆಟ್ಟಿ ಯರುಕೋಣೆ, ಕಾರ್ಯದರ್ಶಿ ಸಂತೋಷ ಶೆಟ್ಟಿ ಹಿಲಿಯಾಣ, ಗರೋಡಿ ಅರ್ಚಕ ಶೀನ
ಪೂಜಾರಿ,ಕರುಣಾಕರ ಪೂಜಾರಿ ಮತ್ತು ವೃಂದವರು, ಕೆರ್ಜಾಡಿ
ಗರೋಡಿ ಅರ್ಚಕ ದಯಾನಂದ ಪೂಜಾರಿ, ನೇಮೋತ್ಸವದ ಪ್ರಮುಖ ಸೇವಾದಾರರು,ಊರ ಪರವೂರ ಭಕ್ತಾದಿಗಳು ಪಾಲ್ಗೊಂಡಿದ್ದರು.