ಬೆಳಗಾವಿ : ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಲೀಡ್ ಕೊಡದಿದ್ದರೆ ವಿದ್ಯುತ್ ಕಟ್ ಮಾಡುವುದಾಗಿ ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆ ಬೆದರಿಕೆ ಹಾಕಿದ್ದರು, ಇದು ವಿವಾದಕ್ಕೆ ಕಾರಣವಾಗಿದೆ.

ಕಾಗವಾಡ ತಾಲೂಕು ಜುಗುಳ ಗ್ರಾಮದಲ್ಲಿ ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಕಾಗವಾಡ ಶಾಸಕ ರಾಜು ಕಾಗೆ ಅವರು, ಕಾಂಗ್ರೆಸ್‌ಗೆ ಲೀಡ್ ಕಡಿಮೆ ಕೊಟ್ಟರೆ ಕರೆಂಟ್ ಕೊಡಲ್ಲ. ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಲೀಡ್ ಕೊಟ್ಟಿದ್ದಕ್ಕೆ ಕರೆಂಟ್ ತೆಗೀತಾ ಇದ್ದೇವೆ ಅಷ್ಟೇ. ಮತ್ತೆ ಲೋಕಸಭೆಯಲ್ಲಿ ಲೀಡ್ ಕೊಡಲಿಲ್ಲ ಎಂದರೆ ಕರೆಂಟ್ ಕೊಡುವುದೇ ಇಲ್ಲ, ಸಂಪೂರ್ಣ ಕಟ್ ಮಾಡುತ್ತೇವೆ ಎಂದು ಬೆದರಿಕೆ ಹಾಕುವ ಮೂಲಕ ಟೀಕೆಗೆ ಕಾರಣರಾಗಿದ್ದಾರೆ. ಕಾಗೆ ಹೇಳಿಕೆ ಸಂಬಂಧ ಚುನಾವಣಾ ಆಯೋಗ ನೋಟಿಸ್‌ ನೀಡಿದೆ.

ಸಂಪೂರ್ಣ ಕರೆಂಟ್ ಕಟ್ ಮಾಡಿಬಿಡುತ್ತೇವೆ.
ವಿಧಾನಸಭೆ ಚುನಾವಣೆ ಯಲ್ಲಿ ಕಡಿಮೆ ಲೀಡ್ ಕೊಟ್ಟಿದ್ದಕ್ಕೆ ಕರೆಂಟ್ ತೆಗೀತಾ ಇದ್ದೇವೆ ಅಷ್ಟೇ. ಮತ್ತೆ ಲೋಕಸಭೆಯಲ್ಲಿ ಲೀಡ್ ಕೊಡಲಿಲ್ಲ ಎಂದರೆ ಕರೆಂಟ್ ಕೊಡುವುದೇ ಇಲ್ಲ, ಸಂಪೂರ್ಣ ಕಟ್ ಮಾಡುತ್ತೇವೆ ಎಂದು ರಾಜು ಕಾಗೆ ಹೇಳಿದ್ದಾರೆ.