ಬೆಳಗಾವಿ : ವೈದ್ಯರ ದಿನಾಚರಣೆ ನಿಮಿತ್ತ ನಿಯತಿ ಫೌಂಡೇಶನ್ ಹಾಗೂ ರಾಜಮಾತಾ ಜಿಜೌ ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದಲ್ಲಿ ಡೆಂಗ್ಯೂ ಜಾಗೃತಿ ಹಾಗೂ ಮುಂಜಾಗ್ರತಾ ಔಷಧಿ ವಿತರಣೆ ಮಾಡಲಾಯಿತು.ದೀಪ ಬೆಳಗಿಸಿ ಪೂಜೆ ಸಲ್ಲಿಸಿದ ನಂತರ, ಡಾ. ಸೋನಾಲಿ ಸರ್ನೋಬತ್ ಮಾತನಾಡಿ, ಸಾಮಾಜಿಕ ಜವಾಬ್ದಾರಿಯ ಬಗ್ಗೆ ಮಾತನಾಡಿದರು. ಡಾ.ಸುಧೀರ್ ಬಿ.ಕೆ ಅವರು ಡೆಂಗ್ಯೂ ಮತ್ತು ಅದನ್ನು ತಡೆಗಟ್ಟುವ ಬಗ್ಗೆ ತಿಳಿಸಿದರು. ಮಹಿಳಾ ಸಬಲೀಕರಣದ ಸಂಕೇತವಾಗಿ ನಿಯತಿ ಫೌಂಡೇಶನ್ನಿನ ವತಿಯಿಂದ ಮಂಗಲ್ ಪಾಟೀಲ ಅವರಿಗೆ ಡಾ. ಸೋನಾಲಿ ಸರ್ನೋಬತ್ ಹೊಲಿಗೆ ಯಂತ್ರವನ್ನು ಕೊಡುಗೆಯಾಗಿ ನೀಡಿದರು.ಶಾಹುನಗರದ ನಿವಾಸಿಗಳೊಂದಿಗೆ ಮಹಿಳೆಯರು ಮತ್ತು ಮಕ್ಕಳಿಗೆ ಡೆಂಗ್ಯೂ ಹನಿ ಹಾಕಲಾಯಿತು.ದೀಪಾಲಿ ಮಾಲಕರಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮದ ನಿರೂಪಣೆ ಮಾಡಿದರು.ಡಾ.ಸುಧೀರ ಬಿ.ಕೆ.,ಯುವ ಪರಿವರ್ತನ ಸಂಯೋಜಕ ಪ್ರವೀಣ ಸುಳಗೇಕರ, ಮಾಜಿ ಸೇವಾ ಯೋಧ ಸಿದ್ಧಪ್ಪ ಹಿಂಗ್ಮಿರೆ, ಮಂಗಲ ಪಾಟೀಲ, ಗೀತಾಂಜಲಿ ಚೌಗುಲೆ, ದೀಪಾಲಿ ಮಲಕಾರಿ, ಕಾಂಚನ್ ಚೌಗುಲೆ ಉಪಸ್ಥಿತರಿದ್ದರು.