ಮೂಡುಬಿದಿರೆ:
ಎಮೋಷನಲ್ ಇಂಟಲಿಜೆನ್ಸ್ ಸೋಷಿಯಲ್‌ ಕಾಂಪಿಟೆನ್ಸ್ ಅಂಡ್ ಸೆಲ್ಪ್ – ಕಾನ್ಸೆಪ್ಟ್ ಆ್ಯಜ್ ಪ್ರೆಡಿಕ್ಟರ್ಸ ಆಫ್ ಆಕಾಡೆಮಿಕ್ ಅಚಿವ್ ಮೆಂಟ್ ಅಮಾಂಗ್ ಸೆಕೆಂಡರಿ ಸ್ಕೂಲ್ ಚಿಲ್ಡ್ರನ್‌ ವಿಥ್ ಸ್ಪೇಷಲ್ ನೀಡ್ಸ್‌ ವಿಷಯದ ಕುರಿತಾಗಿ ಆಳ್ವಾಸ್ ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಶಂಕರಮೂರ್ತಿ ಎಚ್.ಕೆ. ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪಿಎಚ್ ಡಿ ಪದವಿ ನೀಡಿದೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಶಿಕ್ಷಣ ವಿಭಾಗದ ಸಹ- ಪ್ರಾಧ್ಯಾಪಕಿ ಡಾ. ಸುಷ್ಮಾ ಆರ್. ಮಾರ್ಗದರ್ಶನದಲ್ಲಿ ಸಿದ್ದಪಡಿಸಿದ್ದರು. ಶಂಕರಮೂರ್ತಿ ಅವರು ಸಂಗೀತ ನಿರ್ದೇಶಕ ದಿ. ಹನುಮಂತಪ್ಪ- ಗೌರಮ್ಮ ದಂಪತಿ ಪುತ್ರ. ನೀರ್ಕೆರೆ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಡಾ. ಪ್ರತಿಮಾ ಅವರ ಪತಿ.