ಬೆಂಗಳೂರು: ಎಲ್ಲಾ ವರ್ಗದ ಜನರನ್ನು ಆಕರ್ಷಿಸುವ ರಾಮಾಯಣದ ಕಥೆಗಳು, ಧಾರಾವಾಹಿಗಳು ಎಂದಿಗೂ ಹೊಸದರಂತೆ ಕಾಣುತ್ತದೆ. ಕೋವಿಡ್ ಕಾಲದಲ್ಲಿ ಹಿಂದಿ ಭಾಷೆಯ ರಾಮಾಯಣ, ಮಹಾಭಾರತ, ರಾಧಾಕೃಷ್ಣ ಧಾರಾವಾಹಿಗಳು ಕನ್ನಡದಲ್ಲಿ ಪ್ರಸಾರಗೊಂಡು ಜನರನ್ನು ಸೆಳೆದಿದ್ದವು. ಇದೀಗ ಉದಯ ಟಿವಿಯಲ್ಲಿ ಮತ್ತೆ ‘ಶ್ರೀಮದ್ ರಾಮಾಯಣ’ವನ್ನು ಪ್ರಸಾರ ಮಾಡಲಾಗುತ್ತಿದೆ.

ಮೇ 20 ರಿಂದ ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಸಂಜೆ 6 ಕ್ಕೆ ಪ್ರಸಾರ ಮಾಡಲಾಗುತ್ತದೆ.

ಧಾರಾವಾಹಿ ಪ್ರಸಾರದ ಜತೆಗೆ ವೀಕ್ಷಕರನ್ನು ಸೆಳೆಯಲು ವಾಹಿನಿ ವಿಶೇಷ ಬಹುಮಾನವನ್ನೂ ಘೋಷಿಸಿದೆ. ಶ್ರೀಮದ್ ರಾಮಾಯಣದ ಪ್ರತಿ ಸಂಚಿಕೆಯ 250 ವೀಕ್ಷಕರಿಗೆ ತಲಾ ಒಂದು ಸಾವಿರ ನಗದು ಬಹುಮಾನ ಗೆಲ್ಲುವ ಅವಕಾಶ ನೀಡುತ್ತಿದೆ.

ಧಾರಾವಾಹಿ ವೀಕ್ಷಿಸಿ ಕೊನೆಯಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಮಿಸ್ ಕಾಲ್ ಮೂಲಕ ಸರಿ ಉತ್ತರ ನೀಡಿದರೆ ಅದೃಷ್ಟಶಾಲಿ 250 ವೀಕ್ಷಕರಿಗೆ ಪ್ರತಿ ಸಂಚಿಕೆಗೆ ತಲಾ ₹1000 ನಗದು ಬಹುಮಾನ ನೀಡಲಾಗುವುದು ಎಂದು ವಾಹಿನಿ ಮಾಹಿತಿ ಹಂಚಿಕೊಂಡಿದೆ.