ಶ್ರೀ ಆದಿ ಶಂಕರಾಚಾರ್ಯರು ಶ್ರೀ ಮೂಕಾಂಬಿಕಾ ದೇವಿಯ ಇಷ್ಟ ವಿಗ್ರಹವನ್ನು ಪಂಚಲೋಹಗಳಲ್ಲಿ ಪ್ರತಿಷ್ಠಾಪಿಸಿದ ನಂತರ ಮಾರಣಕಟ್ಟೆ ಮಾರ್ಗವಾಗಿ ಬಂದು ಬ್ರಹ್ಮಲಿಂಗೇಶ್ವರ ಸನ್ನಿಧಿಯಲ್ಲಿ ಸಹ “ಶ್ರೀ ಚಕ್ರ’ವನ್ನು ಸ್ಥಾಪಿಸಿ ಈ ಕ್ಷೇತ್ರವನ್ನು ಸದಾ ಜಾಗ್ರತಗೊಳಿಸಿದ್ದಾರೆ ಎಂಬ ಪ್ರತೀತಿ ಇದೆ. ಶ್ರೀ ಮಾರಣಕಟ್ಟೆ ಕ್ಷೇತ್ರ ಮಹಾತ್ಮ ಎಂಬ ಈ ಅಧ್ಯಾಯವು ಮಹಾಭೈರವೀ ಪುರಾಣಾಂತರ್ಗತವಾದುದ್ದು.

ತುಳುನಾಡ ಜನರ ಆರಾಧ್ಯ ದೈವ, ಮಕರ ಸಂಕ್ರಮಣ ದಿನದಂದು ವಿಜೃಂಭಣೆಯಿಂದ ಪೂಜೆಗೊಳ್ಳುವ ದೇವ, ಮೂಲೋಕದೊಡತಿ ಮೂಕಾಂಬಿಕೆಯಿಂದ ಮಡಿದು ಭೂಲೋಕದ ಧರೆಯಲ್ಲಿ ಕಾರಣಿಕ ದೈವವಾಗಿ ಮಾರಣಕಟ್ಟೆಯ ಧರೆಯಲಿ ನೆಲೆಸಿ ನಿಂತವನೇ ಶ್ರೀ ಬ್ರಹ್ಮಲಿಂಗೇಶ್ವರ ದೇವರು. ಕುಂದಾಪುರದಿಂದ ಕೊಲ್ಲೂರಿಗೆ ಸಂಚರಿಸುವ ಮಾರ್ಗ ಮಧ್ಯದಲ್ಲಿ ಚಿತ್ತೂರಿನ ಬಳಿ ಇರುವ ಪುರಾಣ ಪ್ರಸಿದ್ಧ ಕ್ಷೇತ್ರವೇ ಶ್ರೀ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಾಲಯ.

ಮಾರಣಕಟ್ಟೆ :
ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಮಕರ ಸಂಕ್ರಮಣ ಉತ್ಸವ ಪ್ರಯುಕ್ತ ಜಾತ್ರೆಯ ಸಂಭ್ರಮ ಏರ್ಪಟ್ಟಿದೆ. ಜನವರಿ 15ರಂದು ಬೆಳಗ್ಗೆ 9ಕ್ಕೆ ಶ್ರೀ ಬ್ರಹ್ಮಲಿಂಗೇಶ್ವರನ ಸನ್ನಿಧಿಯಲ್ಲಿ ಮಹಾಮಂಗಳಾರತಿ, ರಾತ್ರಿ 10.30ಕ್ಕೆ ಗೆಂಡ ಸೇವೆ, ಜ. 16ರಂದು ಬೆಳಗ್ಗೆ 9.30ಕ್ಕೆ ಮಹಾ ಮಂಗಳಾರತಿ, ಅನಂತರ ಮಂಡಲ ಸೇವೆ, ಜ. 17ರಂದು ಬೆಳಗ್ಗೆ 9.30ಕ್ಕೆ ಮಹಾಮಂಗಳಾರತಿ, ಮಂಡಲ ಸೇವೆ, ರಾತ್ರಿ 8ಕ್ಕೆ ಕಡುಬು ನೈವೇದ್ಯ, ಮಹಾಮಂಗಳಾರತಿ, ರಾತ್ರಿ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ಮೇಳದಿಂದ ಯಕ್ಷಗಾನ ಸೇವೆ ಆಟ ನಡೆಯಲಿದೆ.

ಪ್ಲಾಸ್ಟಿಕ್‌ ಮುಕ್ತ ಮಾರಣಕಟ್ಟೆ ಜಾತ್ರೆ ಪ್ರಯುಕ್ತ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಗೆಂಡ ಸೇವೆ, ಮಂಡಲ ಸೇವೆ ಹಾಗೂ ಮಹಾಪೂಜೆ ನಡೆಯುವ ವೇಳೆ ಭಕ್ತರ ಪೂಜೆ, ಹಣ್ಣುಕಾಯಿ ಸೇವೆ ಜರಗುವುದಿಲ್ಲ ಎಂದು ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಸಿ. ಸದಾಶಿವ ಶೆಟ್ಟಿ ತಿಳಿಸಿದ್ದಾರೆ.

 

ಮಾರಣಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರನಿಗೆ ಜಾತ್ರಾ ಮಹೋತ್ಸವದ ಸಂಭ್ರಮ. ಬ್ರಹ್ಮಲಿಂಗೇಶ್ವರನಿಗೆ ಪ್ರಿಯವಾದ ಅಪರೂಪದ ಹೆಮ್ಮಾಡಿ ಸೇವಂತಿಗೆ ಹೂವು ಇಳುವರಿ ಕಡಿಮೆಯಾಗಿದ್ದು, ಈ ಬಾರಿ ದುಬಾರಿಯಾಗಿದೆ. ಈ ಕಾರಣದಿಂದಾಗಿ ಹೂವಿನ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

22 ಎಕರೆ ಪ್ರದೇಶ
ಹೆಮ್ಮಾಡಿ ಗ್ರಾಮದ ಬಹುಭಾಗ, ಕಟ್‌ಬೆಲ್ತೂರು, ಕನ್ಯಾನ ಗ್ರಾಮಗಳ ಅಂದಾಜು 22 ಎಕರೆ ಪ್ರದೇಶಗಳಲ್ಲಿ ಸೇವಂತಿಗೆ ಹೂವು ಬೆಳೆಯುತ್ತಾರೆ. ಹೆಮ್ಮಾಡಿಯಲ್ಲಿ 42 ಮಂದಿ, ಕಟ್‌ಬೆಲ್ತೂರು ಗ್ರಾಮದ 6 ಮಂದಿ ಹಾಗೂ ಕನ್ಯಾನ ಗ್ರಾಮದ 6 ಮಂದಿ ಈ ಹೆಮ್ಮಾಡಿ ಸೇವಂತಿಗೆ ಹೂವನ್ನು ಬೆಳೆಯುತ್ತಾರೆ.
ಬ್ರಹ್ಮಲಿಂಗೇಶ್ವರ ಪ್ರಿಯ
ಮಾರಣಕಟ್ಟೆ ಜಾತ್ರೆಯಲ್ಲಿ ಹೆಮ್ಮಾಡಿ ಸೇವಂತಿಗೆಗೆ ಭಾರೀ ಬೇಡಿಕೆಯಿದೆ. ಬ್ರಹ್ಮಲಿಂಗೇಶ್ವರನಿಗೆ ಹೆಮ್ಮಾಡಿ ಸೇವಂತಿಗೆ ಅತ್ಯಂತ ಪ್ರಿಯವಾಗಿದ್ದು, ಈ ಹೂವನ್ನು ಅರ್ಪಿಸಿ, ಭಕ್ತಿಯಿಂದ ಕೇಳಿದರೆ, ಇಷ್ಟಾರ್ಥವೆಲ್ಲ ಈಡೇರುತ್ತದೆ ಎನ್ನುವ ಪ್ರತೀತಿಯಿದೆ.

ಮಾರಣಕಟ್ಟೆ ಜಾತ್ರೆ ಈ ಭಾಗದ ಅತ್ಯಂತ ದೊಡ್ಡ ಹಬ್ಬವಾಗಿದೆ. ಹೆಮ್ಮಾಡಿಯ ಸೇವಂತಿಗೆ ಹೂವಿಗೆ ಅತಿ ದೊಡ್ಡ ಮಾರುಕಟ್ಟೆ. ಈ ಜಾತ್ರೆಗೆ 30 ರಿಂದ 40 ಲಕ್ಷದಷ್ಟು ಬೇಕು. ಈ ಹಿಂದೆ ಒಬ್ಬೊಬ್ಬ ಬೆಳೆಗಾರರು ಮೂರರಿಂದ ನಾಲ್ಕು ಲಕ್ಷದಷ್ಟು ಹೂ ಕೊಡುತ್ತಿದ್ದರು. ಆದರೆ ಈ ಸಲ ಹೂ ಬೆಳೆಗಾರರು ಕೇವಲ 50 ರಿಂದ 1 ಲಕ್ಷ ಹೂ ಕೊಡಬಹುದಾಗಿದೆ. ಕಳೆದ ಸಲ ಒಂದು ಸಾವಿರ ಹೂವಿಗೆ 250 ರಿಂದ 350 ದರ ಇತ್ತು. ಈ ಸಲ 400 ರಿಂದ 450 ದರ ಕೊಟ್ಟರೂ ಅಚ್ಚರಿ ಇಲ್ಲ.

ಅಪೂರ್ವ ಹಿನ್ನೆಲೆ :
ಶ್ರೀ ದೇವಿ ಮೂಕಾಂಬೆಯಿಂದ ಮೂಕಾಸುರನು ಹತನಾದ ಕ್ಷೇತ್ರ ಶ್ರೀ ಮಾರಣಕಟ್ಟೆಯಾಗಿ ಲಕ್ಷಾಂತರ ಭಕ್ತರನ್ನೊಳಗೊಂಡು ಪ್ರಸಿದ್ಧಿ ಪಡೆದಿದೆ. ಮೂಲೋಕದೊಡತಿ ಶ್ರೀ ಮೂಕಾಂಬಿಕೆಯಿಂದ ಮಡಿದ ಮೂಕಾಸುರ ಶ್ರೀ ದೇವಿಯಿಂದ ವರ ಪಡೆದು ಕಾರಣೀಕ ದೈವ ಶ್ರೀ ಬ್ರಹ್ಮಲಿಂಗೇಶ್ವರನಾಗಿ ಮಾರಣಕಟ್ಟೆಯಲ್ಲಿ ನೆಲೆಸಿದ್ದಾನೆ.

ಮಾರಣಕಟ್ಟೆಯು ಕುಂದಾಪುರದಿಂದ ಕೊಲ್ಲೂರು ಮಾರ್ಗದಲ್ಲಿ ಕುಂದಾಪುರದಿಂದ 16 ಕಿಮೀ ದೂರದಲ್ಲಿದೆ. ಈ ಗ್ರಾಮವನ್ನು ಕಂಚಿನಕೊಡ್ಲು ಎಂದೂ ಕರೆಯುತ್ತಾರೆ. ಇಲ್ಲಿ ಬ್ರಹ್ಮಲಿಂಗೇಶ್ವರ ದೇವಸ್ಥಾನವಿದೆ. ಇದು ಉತ್ತರ ದಿಕ್ಕಿನಲ್ಲಿರುವ ಬ್ರಹ್ಮಕುಂಡ ನದಿಯ ದಡದಲ್ಲಿದೆ. ಇದು ಪೂರ್ವಕ್ಕೆ ಕಡಿದಾದ ತಿರುವು ಪಡೆದು ಈ ಸ್ಥಳದ ಸೌಂದರ್ಯವನ್ನು ಹೆಚ್ಚಿಸುತ್ತದೆ.

ಅಸುರನಾದ ಕಮ್ಹಾಸುರನು ಭೈರವಿ ಯಾಗವನ್ನು ಮಾಡಿ ಜಗನ್ಮಾತೆ ಯನ್ನು ಸಂತೋಷಪಡಿಸಿದನು. ಅವನು ಯಾವುದೇ ಪುರುಷ ಅಸ್ತಿತ್ವದಿಂದ ಕೊಲ್ಲಲ್ಪಡಬಾರದು ಎಂದು ವರವನ್ನು ತೆಗೆದುಕೊಂಡನು. ವರವನ್ನು ಪಡೆದ ಅಸುರನು ಮೂರು ಲೋಕಗಳಲ್ಲಿ ವಿನಾಶವನ್ನು ಉಂಟುಮಾಡಲು ಪ್ರಾರಂಭಿಸಿದನು. ಶಾಂತಿ ಮತ್ತು ಒಳ್ಳೆಯ ಜನರನ್ನು ಕದಡಿದನು. ತ್ರಿಮೂರ್ತಿಗಳು ಮತ್ತು ಎಲ್ಲಾ ದೇವತೆಗಳು ತನ್ನ ದುಷ್ಕೃತ್ಯಗಳಿಂದ ತಮ್ಮನ್ನು ರಕ್ಷಿಸಲು ಜಗನ್ಮಾತೆ ಯನ್ನು ಪ್ರಾರ್ಥಿಸಿದರು. ಜಗನ್ಮಾತೆಯು ತನ್ನ ವರದಿಂದಾದ ಪರಿಣಾಮವನ್ನು ಸರಿಪಡಿಸಲು ಅವನನ್ನು ಎಚ್ಚರಿಸಲು ಸಂದೇಶವಾಹಕನನ್ನು ಕಳುಹಿಸುತ್ತಾಳೆ ಆದರೆ ಅವನು ದುರಹಂಕಾರದಿಂದ ಪಶ್ಚಾತ್ತಾಪ ಪಡುವುದಿಲ್ಲ ಎಂದನು. ಮತ್ತಷ್ಟು ಶಕ್ತಿಗಳನ್ನು ಪಡೆಯಲು ಅವನು ಶಿವ ಅಥವಾ ಶಂಕರನನ್ನು ಮೆಚ್ಚಿಸಲು ತೀವ್ರ ತಪಸ್ಸು ಮಾಡುತ್ತಾನೆ. ಅವನು ಇದ್ದಕ್ಕಿದ್ದಂತೆ ತನ್ನ ಮಾತಿನ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ ಅಂದರೆ ಅವನು ‘ಮೂಕ’ನಾಗುತ್ತಾನೆ. ಯುದ್ಧಭೂಮಿಯಲ್ಲಿ ಅವನು ಜಗನ್ಮಾತೆಯನ್ನು ನೋಡುತ್ತಾನೆ ಮತ್ತು ತನ್ನ ಮೂರ್ಖತನ ಮತ್ತು ದುಷ್ಕೃತ್ಯಗಳನ್ನು ತಕ್ಷಣವೇ ಅರಿತುಕೊಳ್ಳುತ್ತಾನೆ. ಆದರೆ ಅವನ ಮೂಕ ಸ್ಥಿತಿಯಿಂದಾಗಿ ಅವನು ಕ್ಷಮೆಯನ್ನು ಕೇಳಲು ಸಾಧ್ಯವಾಗುವುದಿಲ್ಲ. ಜಗನ್ಮಾತೆ ಇದನ್ನು ಅರಿತು ಅವನಿಗೆ ವಾಕ್ ಶಕ್ತಿಯನ್ನು ನೀಡುತ್ತಾಳೆ. ಮೂಕಾಸುರ (ಕಮ್ಹಾಸುರ) ಪಶ್ಚಾತ್ತಾಪಪಟ್ಟು ಮೋಕ್ಷಕ್ಕಾಗಿ ಬೇಡಿಕೊಳ್ಳುತ್ತಾನೆ. ಶಾಶ್ವತವಾಗಿ ಅವನ ಹೆಸರನ್ನು ಉಳಿಸುವಂತೆ ಕೇಳುತ್ತಾನೆ. ಜಗನ್ಮಾತೆಯು ಒಪ್ಪುತ್ತಾಳೆ. ಅವನನ್ನು ಕೊಂದ ನಂತರ ಅವಳನ್ನು ಮೂಕಾಂಬಿಕಾ ಎಂದು ಕರೆಯುವಂತೆ ಹೇಳುತ್ತಾಳೆ.

ಸ್ಕಂದ ಪುರಾಣದ ಪ್ರಕಾರ ದೇವಿ ಮೂಕಾಂಬಿಕಾ ಇಲ್ಲಿ ಮೂಕಾಸುರನನ್ನು ಕೊಂದ ನಂತರ ಮಾರಣ ಹೋಮವನ್ನು ಮಾಡಿದಳು. ರಾಕ್ಷಸನನ್ನು ಸಂಹರಿಸಿದ ನಂತರ ದಿವ್ಯಮಾತೆ ರಾಕ್ಷಸನ ಆತ್ಮಕ್ಕೆ ದೈವತ್ವವನ್ನು ದಯಪಾಲಿಸಿದರು. ಇದರಿಂದ ಅವನನ್ನು ಬ್ರಹ್ಮಲಿಂಗೇಶ್ವರ ಎಂದು ಕರೆಯುತ್ತಾರೆ. ದೇವಾಲಯವು ಪೂರ್ವ ದಿಕ್ಕಿಗೆ ಮತ್ತು ಗರ್ಭಗುಡಿ ಉತ್ತರಕ್ಕೆ ಮುಖಮಾಡಿದೆ. ಗರ್ಭಗುಡಿಯ ಬದಿಯಲ್ಲಿ ಮುಖ್ಯ ದೇವರು ಬ್ರಹ್ಮಲಿಂಗೇಶ್ವರ ಮಲಯಾಳಿ ಯಕ್ಷಿ ಮತ್ತು ವಾತಯಕ್ಷಿ ಮತ್ತು ಎರಡು ದ್ವಾರಪಾಲಕರೂ ಇದ್ದಾರೆ. ಗರ್ಭಗುಡಿಯ ಬಲಭಾಗದಲ್ಲಿ ಕಟ್ಟೆ ಇದೆ. ಇದರಲ್ಲಿ ಶ್ರೀ ಚಕ್ರ ಯಂತ್ರವನ್ನು ಆದಿ ಶಂಕರರು ಸ್ಥಾಪಿಸಿದ್ದಾರೆ. “ಬ್ರಹ್ಮಲಿಂಗೇಶ್ವರ ಗುಡಿ” ಯ ಪಕ್ಕದಲ್ಲಿ ಹಶೈಗುಳಿ (ಕಾಶಿ ಅಥವಾ ವಾರಣಾಸಿಯಿಂದ ಬಂದವರು), ಹೈಗುಳಿ, ಚಿಕ್ಕು ಮತ್ತು ಇತರ ಪರಿವಾರದ ದೈವಗಳ ‘ದೈವದ ಮನೆ’ ಇದೆ.

ಮೂಕಾಂಬಿಕಾ ದೇವಿ ಮತ್ತು ಶ್ರೀ ಬ್ರಹ್ಮಲಿಂಗೇಶ್ವರರ ನಡುವೆ ತಾಯಿ-ಮಗನ ಸಂಬಂಧವಿದೆ.
ದೇವಾಲಯದಲ್ಲಿ ಶ್ರೀ ಚಕ್ರವನ್ನು ಸ್ಥಾಪಿಸಿದ ಋಷಿ ಆದಿ ಶಂಕರಾಚಾರ್ಯರಿಂದಲೂ ದೇವಾಲಯವು ಪ್ರಭಾವಿತವಾಗಿದೆ. ಆದ್ದರಿಂದ, ಇದನ್ನು ಆದಿ ಶಂಕರರ ಸ್ಥಾಪನೆ ಎಂದು ಕರೆಯಲಾಗುತ್ತದೆ.

ಮಕರ ಸಂಕ್ರಾಂತಿಯಂದು ದಕ್ಷಿಣ ಕನ್ನಡದ ಇತರ ಅನೇಕ ದೇವಾಲಯಗಳಂತೆ ಇಲ್ಲಿಯೂ ದೇವಾಲಯದ ಜಾತ್ರೆಯನ್ನು ಏರ್ಪಡಿಸಲಾಗುತ್ತದೆ. ಇದು ಉಡುಪಿ ಜಿಲ್ಲೆ ಮತ್ತು ನೆರೆಯ ಜಿಲ್ಲೆಗಳಿಂದ ಬಹುಸಂಖ್ಯೆಯ ಜನರನ್ನು ಆಕರ್ಷಿಸುತ್ತದೆ. ಭಕ್ತರ ಮನಸ್ಸಿನಲ್ಲಿ ಆಳವಾದ ಪ್ರಭಾವ ಬೀರುವ ದೇವರ (ವಾಕ್ಯ ತೀರ್ಮಾನ) ಹೆಸರಿನಲ್ಲಿ ವಿವಾದಗಳು ಮತ್ತು ಭರವಸೆಗಳನ್ನು ಇತ್ಯರ್ಥಪಡಿಸುವುದು ಸ್ಥಳದ ವಿಶೇಷತೆಯಾಗಿದೆ. ಚೈತನ್ಯದಿಂದ ಬಳಲುತ್ತಿರುವ ಜನರು ಭಗವಂತನ ಕೃಪೆಯಿಂದ ಸ್ವಾಧೀನಪಡಿಸಿಕೊಳ್ಳಬಹುದು. ವಿಶೇಷವಾಗಿ ಬ್ರಹ್ಮರಾಕ್ಷಸನಿಂದ (ಜೀವನದಲ್ಲಿ ದುಷ್ಕೃತ್ಯಗಳನ್ನು ಮಾಡಿದ ಮೃತ ಬ್ರಾಹ್ಮಣನ ಆತ್ಮ) ತೊಂದರೆಗೊಳಗಾದ ಜನರು ಈ ರೀತಿಯ ಸಮಸ್ಯೆಗಳಿಗೆ ನಿರ್ಣಾಯಕ ಪರಿಹಾರಗಳನ್ನು ಪಡೆಯಬಹುದು.

ಸೇವಂತಿಗೆ ಘಮಘಮ :
ಹೆಮ್ಮಾಡಿ ಸೇವಂತಿಗೆ ಭಾರಿ ಪ್ರಸಿದ್ಧಿ :
ಹೆಮ್ಮಾಡಿ ಸೇವಂತಿಗೆಗೆ ತನ್ನದೇ ಆದ ವಿಶೇಷತೆ ಇದೆ. ಗಿಡ ಬೆಳೆಯುವಾಗ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಕಡೆ ದಕ್ಷಿಣಾಭಿಮುಖವಾಗಿ ವಾಲುತ್ತದೆ ಎನ್ನುವುದು ಇಲ್ಲಿನ ರೈತರ ನಂಬಿಕೆ. ಗಾತ್ರದಲ್ಲಿ ಚಿಕ್ಕದಾಗಿದ್ದು, ಗಟ್ಟಿ ಬಾಳಿಕೆಯುಳ್ಳ, ವಿಶಿಷ್ಟ ಸುವಾಸನೆ ಬೀರುವ ಈ ಸೇವಂತಿಗೆ ಹೆಮ್ಮಾಡಿ ಆಸುಪಾಸು ಬಿಟ್ಟರೆ ಬೇರೆಲ್ಲೂ ಬೆಳೆಯುವುದಿಲ್ಲ ಎನ್ನುವುದು ವಿಶೇಷ.
ಜನವರಿ ತಿಂಗಳಲ್ಲಿ ಗದ್ದೆಗಳಲ್ಲಿ ನಳನಳಿಸಿ ವಿಶಿಷ್ಟ ಸುವಾಸನೆಯ ಕಂಪು ಬೀರಬೇಕಿದ್ದ ಹೆಮ್ಮಾಡಿ ಸೇವಂತಿಗೆ ದಿನದಿಂದ ದಿನಕ್ಕೆ ಬದಲಾಗುತ್ತಿರುವ ಹವಾಮಾನ ವೈಪರಿತ್ಯ, ಹಲವು ರೋಗಗಳ ಬಾಧೆ ಇನ್ನಿತರ ಕಾರಣಗಳಿಂದಾಗಿ ಹೂವು ಅರಳದೆ ಕೃಷಿಕರು ಅಪಾರ ನಷ್ಟ ಅನುಭವಿಸುವ ಆತಂಕದಲ್ಲಿದ್ದಾರೆ.

ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರ ದೇವರಿಗಾಗಿಯೇ ಬೆಳೆಯುವ ಹೆಮ್ಮಾಡಿ ಸೇವಂತಿಗೆಯನ್ನು ಸಾಮಾನ್ಯವಾಗಿ ಮಳೆಗಾಲದ ಕೊನೆಯ ಅವಧಿ, ಆಗಸ್ಟ್ ಆರಂಭದಲ್ಲಿ ಆರಂಭಿಸುತ್ತಾರೆ. ಉತ್ತಮ ಚಳಿಯಾದರೆ ಇಬ್ಬನಿ ಹೂವಿನ ಮೊಗ್ಗಿನ ಮೇಲೆರಗಿ ಸರಿಸುಮಾರು ಆರು ತಿಂಗಳ ಬಳಿಕ ಜನವರಿಯ ಮಾರಣಕಟ್ಟೆ ಮಕರ ಸಂಕ್ರಮಣಕ್ಕೆ ಸರಿಯಾಗಿ ಹೂವು ಅರಳುತ್ತದೆ. ಹೂವು ಅರಳಿದ ಬಳಿಕ ಮೊದಲು ಬ್ರಹ್ಮಲಿಂಗೇಶ್ವರ ದೇವರಿಗೆ ಅರ್ಪಿಸಿ, ಜಾತ್ರೆಯಲ್ಲಿ ಹೂವು ಮಾರಾಟ ಮಾಡುತ್ತಾರೆ. ಮಾರಣಕಟ್ಟೆ ಜಾತ್ರೆಯ ಬಳಿಕ ವಿವಿಧ ದೇವಸ್ಥಾನಗಳ ಗೆಂಡ ಸೇವೆ, ಕೋಲ, ಪಾಣಾರಾಟ ಮೊದಲಾದೆಡೆಗಳಲ್ಲಿ ಸೇವಂತಿಗೆ ಹೂವು ಮಾರಾಟವಾಗುತ್ತದೆ. ಜನವರಿಯಲ್ಲಿ ಸೇವಂತಿಗೆ ಹೂವು ಆರಳಿ ಹಳದಿ ಬಣ್ಣಗಳಿಂದ ಹೊದ್ದು ಮಲಗುವ ಹೆಮ್ಮಾಡಿಯ ಆಸುಪಾಸಿನ ಗದ್ದೆಗಳನ್ನು ಕಣ್ಣುಂಬಿಕೊಳ್ಳುವುದೇ ಚಂದ. ಆದರೆ ಈ ಬಾರಿ ಸಮಯಕ್ಕೆ ಸರಿಯಾಗಿ ಹೂವು ಅರಳಿಲ್ಲ.
ಹವಾಮಾನ ವೈಪರೀತ್ಯದಿಂದಾಗಿ
ಹೆಮ್ಮಾಡಿ ಸೇವಂತಿ ಅರಳದ ಕಾರಣ ಹೂವಿಗೆ ಬೇಡಿಕೆ ಬಂದಿದೆ. ಬೆಂಗಳೂರು ಮತ್ತು ರಾಮನಗರ ಜಿಲ್ಲೆಯಿಂದ ಈ ಬಾರಿ ಸೇವಂತಿಗೆ ಹೂವನ್ನು ಆಮದು ಮಾಡಿಕೊಳ್ಳುವಂತಾಗಿದೆ.