![](https://udayaprabha.com/wp-content/uploads/2023/11/IMG_20231124_084351.jpg)
ಬೆಂಗಳೂರು :
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ಬಳಸಿಕೊಂಡು ಪ್ರಯಾಣ ಬಳಸಿದ ಮಹಿಳೆಯರ ಸಂಖ್ಯೆ ಬರೋಬ್ಬರಿ 100 ಕೋಟಿ ದಾಟಿದೆ.
ಜೂ.11ರಿಂದ ನವೆಂಬರ್ 22 ರವರೆಗೆ 165 ದಿನಗಳಲ್ಲಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ 178.67 ಕೋಟಿ ಜನ ಪ್ರಯಾಣ ಬೆಳೆಸಿದ್ದಾರೆ. ಅವರಲ್ಲಿ 100. 47 ಕೋಟಿ ಜನ ಮಹಿಳೆಯರು. ಅವರ ಪ್ರಯಾಣದ ಟಿಕೆಟ್ ಬೆಲೆಯೇ ಈಗ 2,397 ಕೋಟಿ ದಾಟಿದೆ.
ಈ ಸಾಧನೆ ಗುರಿ ಮುಟ್ಟಿದ ಹಿನ್ನೆಲೆಯಲ್ಲಿ ಸಂಭ್ರಮ ಮತ್ತು ಸಾರಿಗೆ ಸಂಸ್ಥೆಗಳ ಅಪಘಾತ ರಹಿತ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರಧಾನ ಸಮಾರಂಭವನ್ನು ಸಾರಿಗೆ ಇಲಾಖೆ ನವೆಂಬರ್ 24 ರಂದು ಮಧ್ಯಾಹ್ನ 12ಕ್ಕೆ ವಿಧಾನಸೌಧದಲ್ಲಿ ಹಮ್ಮಿಕೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ , ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಭಾಗವಹಿಸಲಿದ್ದಾರೆ.