ಮಂತ್ರಾಲಯ : ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ಇದೀಗ ಭಕ್ತರಿಗೆ ಬಿದಿರಿನ ತಟ್ಟೆಗಳನ್ನು ಅಳವಡಿಸಲಾಗಿದೆ. ಆಂಧ್ರಪ್ರದೇಶದ ಮುಜರಾಯಿ ಇಲಾಖೆಯಿಂದ ದೇವಸ್ಥಾನಗಳಿಗೆ ನಿರ್ದೇಶನ ಬಂದಿದ್ದು ಭಕ್ತರಿಗೆ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಈ ಕಾರಣಕ್ಕೆ ರಾಘವೇಂದ್ರ ಮಠದ ಮುಂದಿನ ಕಾರಿಡಾರ್ ನಲ್ಲಿ ವೈಟ್ ಪೆಂಟ್ ಮಾಡಿಸುವುದರ ಜೊತೆಗೆ ಬಿದಿರಿನ ತಟ್ಟೆಗಳನ್ನು ಅಳವಡಿಸುವ ಮೂಲಕ ನೆರಳಿನ ವ್ಯವಸ್ಥೆ ಮಾಡಲಾಗಿದೆ.