| Latest Version 9.0.7 |

State News

ಬರ ಪರಿಸ್ಥಿತಿ ವೀಕ್ಷಣೆಗೆ ಸಚಿವರಿಗೆ ಜಿಲ್ಲೆಗಳ ಉಸ್ತುವಾರಿ: ಸಿಎಂ ಡಿಕೆಶಿ ಆದೇಶ

 

 

 

 

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ತಕ್ಷಣವೇ ತಮಗೆ ಹಂಚಿಕೆ ಮಾಡಲಾಗಿರುವ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು, ವಾಸ್ತವ ಸ್ಥಿತಿಯ ಪರಿವೀಕ್ಷಣೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ತುರ್ತು ನಿರ್ದೇಶನ ನೀಡಿದ್ದಾರೆ.

 

ಸೋಮವಾರ(ಆಗಸ್ಟ್ 3) ಅಧಿಕೃತ ಪತ್ರ ಹೊರಡಿಸಿರುವ ಮುಖ್ಯಮಂತ್ರಿಯವರು, ಸಚಿವರು ತಮಗೆ ವಹಿಸಲಾಗಿರುವ ಜಿಲ್ಲೆಗಳಲ್ಲಿ ವೀಕ್ಷಣೆ ನಡೆಸಿ, ವಾಸ್ತವ ಸ್ಥಿತಿಯ ವರದಿಯನ್ನು ತಕ್ಷಣವೇ ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಿಗೆ ಸಲ್ಲಿಸುವಂತೆ ಸೂಚಿಸಿದ್ದಾರೆ.

 

 

ಸಚಿವರಿಗೆ ಹಂಚಿಕೆ ಮಾಡಲಾದ ಜಿಲ್ಲೆಗಳ ವಿವರ:

ಸಚಿವರ ಹೆಸರು (ವಹಿಸಲಾದ ಜಿಲ್ಲೆ)

 

1. ಡಾ. ಜಿ. ಪರಮೇಶ್ವರ (ತುಮಕೂರು)

 

2.ರಘುಮೂರ್ತಿ (ಚಿತ್ರದುರ್ಗ)

 

3. ಭೈರತಿ ಸುರೇಶ್ (ಚಿಕ್ಕಬಳ್ಳಾಪುರ)

 

4.ಕೆ.ಹೆಚ್. ಮುನಿಯಪ್ಪ(ಬೆಂಗಳೂರು ಗ್ರಾಮಾಂತರ)

 

5. ರಾಮಲಿಂಗಾ ರೆಡ್ಡಿ(ಕೋಲಾರ)

 

6. ಹೆಚ್. ಸಿ. ಬಾಲಕೃಷ್ಣ (ಬೆಂಗಳೂರು ದಕ್ಷಿಣ)

 

7. ಬಿ.ಝೆಡ್. ಜಮೀರ್ ಅಹಮದ್ ಖಾನ್(ವಿಜಯನಗರ)

 

8.ಕೆ.ಜೆ. ಜಾರ್ಜ್ (ಚಿಕ್ಕಮಗಳೂರು)

 

9.ಕೆ.ಎಂ. ಶಿವಲಿಂಗೇ ಗೌಡ(ಹಾಸನ)

 

10. ಮಧು ಬಂಗಾರಪ್ಪ (ಶಿವಮೊಗ್ಗ)

 

11. ಎಂ.ಬಿ. ಪಾಟೀಲ್ (ವಿಜಯಪುರ)

 

12. ವಿಜಯಾನಂದ ಕಾಶಪ್ಪನವರ(ಬಾಗಲಕೋಟೆ)

 

13. ಬಸವರಾಜ ರಾಯರೆಡ್ಡಿ (ಗದಗ)

 

14. ಎಸ್. ಎಸ್. ಮಲ್ಲಿಕಾರ್ಜುನ (ದಾವಣಗೆರೆ)

 

15. ರುದ್ರಪ್ಪ ಲಮಾಣಿ (ಹಾವೇರಿ)

 

16. ಸತೀಶ್ ಜಾರಕಿಹೊಳಿ (ಬೆಳಗಾವಿ)

 

17. ಸಂತೋಷ್ ಲಾಡ್ (ಧಾರವಾಡ )

 

18 . ಲಕ್ಷ್ಮಣ ಸವದಿ (ಉತ್ತರ ಕನ್ನಡ)

 

19. ಪ್ರಿಯಾಂಕ್ ಖರ್ಗೆ (ಕಲಬುರಗಿ)

 

20. ಅಜಯ್ ಧರಂ ಸಿಂಗ್ (ರಾಯಚೂರು)

 

21. ಈಶ್ವರ್ ಖಂಡ್ರೆ (ಬೀದರ್)

 

22. ಯು.ಟಿ. ಖಾದರ್ (ದಕ್ಷಿಣ ಕನ್ನಡ ಮತ್ತು ಉಡುಪಿ)

 

23. ಪಿ.ಎಂ. ನರೇಂದ್ರ ಸ್ವಾಮಿ (ಕೊಡಗು)

 

24. ಯತೀಂದ್ರ ಸಿದ್ಧರಾಮಯ್ಯ (ಮೈಸೂರು)

 

25. ಚೆಲುವರಾಯಸ್ವಾಮಿ (ಮಂಡ್ಯ)

 

26. ಪುಟ್ಟರಂಗಶೆಟ್ಟಿ (ಚಾಮರಾಜನಗರ)

 

27. ಬಿ. ನಾಗೇಂದ್ರ (ಬಳ್ಳಾರಿ)

 

28. ಶರಣ ಪ್ರಕಾಶ್ ಪಾಟೀಲ (ಯಾದಗಿರಿ)

 

29. ಶಿವರಾಜ್ ಸಂಗಪ್ಪ ತಂಗಡಗಿ (ಕೊಪ್ಪಳ)

 

30. ಕೃಷ್ಣ ಬೈರೇಗೌಡ (ಬೆಂಗಳೂರು ನಗರ)

Team Udayaprabha
";