ಬೆಳಗಾವಿ : 10 ನೇ (CBSC) ತರಗತಿಯ ಪರೀಕ್ಷೆ ಮುಗಿಸಿದ ಖುಷಿಯಲ್ಲಿ ತನ್ನ ಗೆಳೆಯರೆಲ್ಲರನ್ನು ಕರೆದುಕೊಂಡು ಬೆಳಗಾವಿ ಗಡಿ ಭಾಗದಲ್ಲಿರುವ ಮಹಾರಾಷ್ಟ್ರದ ಕಿತವಾಡ ಫಾಲ್ಸ್ ನಲ್ಲಿ ಮೋಜು ಮಾಡಲು ಹೋಗಿದ್ದ ಬೆಳಗಾವಿ ಹೈಸ್ಕೂಲ್ ವಿಧ್ಯಾರ್ಥಿಯೊಬ್ಬ ನೀರುಪಾಲಾಗಿದ್ದಾನೆ.

ಬೆಳಗಾವಿ ಅಜಮ್ ನಗರ ನಿವಾಸಿ ಹಾಗೂ ಲವ್ ಡೇಲ್ ಸ್ಕೂಲ್‌ ನ ವಿದ್ಯಾರ್ಥಿ ಉಜೈಪ್ ಮುಜಾವರ ಸಾವನ್ನಪ್ಪಿರುವ ಬಾಲಕ.

 

ಬುಧವಾರದಂದು ಉಜೈಪ್ ತನ್ನ SSLC ಪರೀಕ್ಷೆ ಮುಗಿಸಿದ್ದಾನೆ. ಅದೇ ಖುಷಿಯಲ್ಲಿ ಮೋಜು ಮಾಡಲು 14 ಗೆಳೆಯರು ಕೂಡಿಕೊಂಡು ಕಿತವಾಡ ಫಾಲ್ಸ್ ಗೆ ಹೋಗಿದ್ದಾರೆ. ಆಗ ಡ್ಯಾಮಿನ ಹಿನ್ನೀರಿನಲ್ಲಿ ಉಜೈಪ್ ಈಜಲು ಹೋಗಿದ್ದಾನೆ. ಈಜುವಾಗ ಗೆಳೆಯರಿಗೆ ಮುಳುಗಿದ ಹಾಗೆ ಎರಡು ಬಾರಿ ನಕಲಿ ಮಾಡಿಸಿ ತೋರಿಸಿದ್ದಾನೆ. ಇದನ್ನು ನೋಡಿದ ಸ್ನೇಹಿತರು ಈಜುವುದು ಬೇಡ ಹೋಗೋಣ ಬಾ ಎಂದಿದ್ದಾರೆ. ಆದರೆ ಆತ ಬಾರದೆ ಮತ್ತೆ ಅದೆ ರೀತಿ ನಕಲಿ ಮಾಡಲು ಹೋದಾಗ ನೀರಿನಲ್ಲಿ ಮುಳುಗಿದವ ಮೇಲೆ ಬಂದೇ ಇಲ್ಲ. ಆಗ ಭಯಭೀತಗೊಂಡ ಬಾಲಕರು ಕಿರುಚುವುದನ್ನು ಕಂಡು ಓಡಿ ಬಂದ ಸ್ಥಳೀಯರು ಉಜೈಪ್ ನನ್ನು ಹುಡುಕಲು ಪ್ರಯತ್ನಿಸಿದರೂ ಸಿಕ್ಕಿಲ್ಲ.

ನೀರುಪಾಲಾಗಿರುವ ಬಾಲಕನ ಮೃತದೇಹಕ್ಕಾಗಿ ಬೆಳಗಾವಿ NDRF ತಂಡ ಕಾರ್ಯಾಚರಣೆ ನಡೆಸಿದರೂ ಇನ್ನೂ ಸಿಕ್ಕಿಲ್ಲ. ಸ್ನೇಹಿತನ ಸಾವು ಕಣ್ಮುಂದೆ ಕಂಡಿರುವ ಬಾಲಕರು ರಾತ್ರಿಯಿಡೀ ಅವರ ಕುಟುಂಬದವರೊಂದಿಗೆ ಉಜೈಪ್ ನ ಮೃತದೇಹಕ್ಕಾಗಿ ಸ್ಥಳದಲ್ಲೇ ಕಾದು ಕುಳಿತಿದ್ದರು.