| Latest Version 9.0.7 |

State News

ಡಾ. ವಸಂತಕುಮಾರ ಪೆರ್ಲ ಅವರ ಸಂಕೇತಿ ಮತ್ತು ಕನ್ನಡ ಭಾಷೆಯಿಂದ ತುಳುವಿಗೆ ಅನುವಾದಿಸಿದ ಪ್ರಣತಾರ್ತಿ ಹರನ್ ಅವರ ‘ಯಾತ್ರೆ’ ಕಾದಂಬರಿ ಬಿಡುಗಡೆಗೊಳಿಸಿದ ಡಾ. ಎಂ. ಮೋಹನ ಆಳ್ವ

ಮಂಗಳೂರು : ಡಾ. ವಸಂತಕುಮಾರ ಪೆರ್ಲ ಅವರು ಸಂಕೇತಿ ಮತ್ತು ಕನ್ನಡ ಭಾಷೆಯಿಂದ ತುಳುವಿಗೆ ಅನುವಾದಿಸಿದ ಪ್ರಣತಾರ್ತಿ ಹರನ್ ಅವರ ‘ಯಾತ್ರೆ’ ಕಾದಂಬರಿಯನ್ನು ಮಾಡಬಿದಿರೆಯಲ್ಲಿ ಜರಗಿದ ಆಳ್ವಾಸ್ ನುಡಿಸಿರಿಯ ಸಿದ್ಧತಾ ಸಭೆಯಲ್ಲಿ ಡಾ. ಎಂ. ಮೋಹನ ಆಳ್ವ ಅವರು ಬಿಡುಗಡೆಗೊಳಿಸಿದರು. ಅನುವಾದಕ ಡಾ. ವಸಂತಕುಮಾರ ಪೆರ್ಲ, ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ, ಎಂ. ಪಿ. ಶ್ರೀನಾಥ್, ಡಾ. ಪಾದೆಕಲ್ಲು ವಿಷ್ಣು ಭಟ್, ಬಂಟ್ವಾಳದ ರಾಣಿ ಅಬ್ಬಕ್ಕ ಕೇಂದ್ರದ ಡಾ. ತುಕಾರಾಮ ಪೂಜಾರಿ, ಡಾ. ಧನಂಜಯ ಕುಂಬ್ಳೆ, ಸತ್ಯನಾರಾಯಣ ಮಲ್ಲಿಪಟ್ಟಣ ಮೊದಲಾದವರು ಇದ್ದರು.

Team Udayaprabha
";