ಕಕ್ಕೇರಿ: ಖಾನಾಪುರ ತಾಲೂಕು ಹಾಗೂ ರಾಜ್ಯದ ಎಲ್ಲ ಜಿಲ್ಲೆಗಳು ಬರಪೀಡಿತ ಘೋಷಣೆ ಹಾಗೂ ತಕ್ಷಣ ಬರ ಪರಿಹಾರ ಹಣವನ್ನು ಮಂಜೂರು ಮಾಡಿ ಸೇರಿದಂತೆ ರೈತರ ಹಲವಾರು ಸಮಸ್ಯೆಗಳ ಬೇಡಿಕೆಗಳು ಈಡೇರಿಸುವಂತೆ ಒತ್ತಾಯಿಸಿ ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರಿಗೆ ಮನವಿ ಪತ್ರವನ್ನು ಖಾನಾಪುರ ಗ್ರೇಡ್ 2. ಎಸ್ ಕೆ ತಂಗೋಳ್ಳಿ ಇವರು ಮುಖಾಂತರ ಗುರುವಾರದಂದು ಅಖಿಲ ಕರ್ನಾಟಕ ರೈತ ಸಂಘ ರಿ ಬೆಂಗಳೂರು ರಾಜ್ಯ ಉಪಾಧ್ಯಕ್ಷರು ಕಿಶೋರ ಮಿಠಾರಿ ಹಾಗೂ ರೈತ ಮುಖಂಡರು ಮನವಿ ಪತ್ರ ರವಾನಿಸಿದರು.
ರಾಜ್ಯದಲ್ಲಿ, ಹಾಗೂ ಖಾನಾಪುರ ತಾಲೂಕಿನಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆಯಾಗಿದ್ದು ಇದರಿಂದ ಸಾಕಷ್ಟು ಬೆಳೆ ಬೆಳೆಯದೆ ಹಾನಿಯಾಗಿದ್ದು. ಇನ್ನು ಕೆಲವು ಪ್ರದೇಶಗಳಲ್ಲಿ ಬಿತ್ತನೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಖಾನಾಪುರ ತಾಲೂಕು ಹಾಗೂ ರಾಜ್ಯವನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿ ಪ್ರತಿ ಎಕರೆಗೆ ಕನಿಷ್ಠ ರೂ.30,000 ರೂ ಪರಿಹಾರ ನೀಡಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು, ಕೇಂದ್ರ ಫಸಲು ಭೀಮಾ ಯೋಜನೆ ಯಡಿ ಈ ಮೊದಲು ರೈತ ವಿಮಾ ಸಂಸ್ಥೆಗೆ ಹಣ ತುಂಬಿ ಬೆಳೆ ವಿಮಾ ಪರಿಹಾರ ನೀಡ ಬೇಕೆಂದು ಒತ್ತಾಯಿಸಿದರು.
ಮಹದಾಯಿ ಹೋರಾಟಗಾರರು ಹಾಗೂ ಬಿಡದಿ ಟೌನಶಿಪ ರೈತ ಹೋರಾಟಗಾರರ ಮೇಲೆ ಪೊಲೀಸ್ ಇಲಾಖೆಯಿಂದ ಸುಳ್ಳು ಪ್ರಕರಣಗಳು ದಾಖಲಿಸಿಕೊಂಡು ಎಫ್ಐ ಆರ್ ಮಾಡಿದ್ದನ್ನು ಕೂಡಲೇ ಹಿಂಪಡೆಯಬೇಕು. ಮಲಪ್ರಭಾ ನದಿಗೆ ಆಣೆಕಟ್ಟು ಖಾನಾಪುರ ತಾಲೂಕಿನಲ್ಲಿ ನಿರ್ಮಾಣ ಮಾಡಿ ಖಾನಾಪುರ ತಾಲೂಕಿನ ರೈತ ಭೂಮಿಗಳಿಗೆ, ಕುಡಿಯಲು ನೀರಾವರಿ ಯೋಜನೆ ಜಾರಿಗೆ ಮಾಡಬೇಕು.
ಸರ್ಕಾರ ನೂತನ ವಿದ್ಯುತ್ ಖಾಸಗಿಕರಣವನ್ನು ಜಾರಿಗೆ ತಂದಿದ್ದನ್ನು ಕೈ ಬಿಟ್ಟು ಹಳೆ ವಿದ್ಯುತ್ ಕಾಯ್ದೆಯನ್ನು ಜಾರಿಗೆ ತರಬೇಕು. ರೈತರ ಬೇಡಿಕೆಗಳು ಈಡೇರಿಸದಿದ್ದಲ್ಲಿ . ವಿಧಾನಸೌಧ ಬೆಂಗಳೂರು ಚಲೋ ಚಳವಳಿ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಅಖಿಲ ಕರ್ನಾಟಕ ರೈತ ಸಂಘ ರಿ ಬೆಂಗಳೂರು ರಾಜ್ಯ ಉಪಾಧ್ಯಕ್ಷ ಕಿಶೋರ ಮಿಠಾರಿ ಮಾತನಾಡಿ. ರೈತರ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ವಿಫಲವಾಗಿವೆ ಎಂದು ಆರೋಪಿಸಿದರು.
ಪ್ರಾದೇಶಿಕ ಆಯುಕ್ತರು ಬೆಳಗಾವಿ, ಜಿಲ್ಲಾಧಿಕಾರಿಗಳು ಬೆಳಗಾವಿ, ಖಾನಾಪುರ ಶಾಸಕ ವಿಠ್ಠಲ ಹಲಗೇಕರ, ಐಜಿಪಿ ಬೆಳಗಾವಿ, ಎಸ್ ಪಿ ಬೆಳಗಾವಿ, ಸಹಾಯಕ ಕೃಷಿ ನಿರ್ದೇಶಕರು ಖಾನಾಪುರ, ಇವರೆಲ್ಲರಿಗೂ ಮನವಿ ಪತ್ರ ಸಲ್ಲಿಸಲಾಗಿದೆ.
ರೈತ ಮುಖಂಡರಾದ ಬಿಷ್ಟಪ್ಪ ಸುಂಬಳಿ, ಗೋಪಾಲ ಅಗಸಿಮನಿ, ಶಿವಲಿಂಗ ಚನ್ನಾಪುರ, ರುದ್ರಪ್ಪಾ ವೀರಾಪುರ, ಪುಂಡಲೀಕ ಕುರಗುಂದ, ಯಲ್ಲಪ್ಪ ಬೆಳಗಾಂಕರ, ಇತರರಿದ್ದರು.
Udaya Prabha > State News > ರೈತರ ಬೇಡಿಕೆ ಈಡೇರಿಸಲು ಆಗ್ರಹ
ರೈತರ ಬೇಡಿಕೆ ಈಡೇರಿಸಲು ಆಗ್ರಹ
Team Udayaprabha26/07/2026
posted on


,
,

















