ರಾಯಬಾಗ: ಸರ್ಕಾರಿ ಪದವಿ ಕಾಲೇಜಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಅಧ್ಯಯನ ಮಾಡುತ್ತಿರುವುದು ಸಂತೋಷದ ವಿಷಯ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಬುಧವಾರ ಪಟ್ಟಣದ ಡಾ.ಬಾಬು ಜಗಜೀವನರಾಂ ಭವನದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿವಿಧ ಘಟಕಗಳ ಉದ್ಘಾಟನೆ ಹಾಗೂ ಬಿ.ಎ., ಬಿ.ಕಾಂ., ಬಿ.ಎಸ್ಸಿ., ಮತ್ತು ಬಿ.ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಉನ್ನತ ಶಿಕ್ಷಣ ಪಡೆಯುವ ಮೂಲಕ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು. ಉಪನ್ಯಾಸಕರು ಒಳ್ಳೆಯ ಬೋಧನೆ ಜೊತೆಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ನೀಡಬೇಕೆಂದರು.
ಕಾಗವಾಡ ಶಿವಾನಂದ ಕಾಲೇಜ ಆಡಳಿತ ಮಂಡಳಿ ಕಾರ್ಯದರ್ಶಿ, ನಿವೃತ್ತ ಪ್ರಾಚಾರ್ಯ ಪ್ರೊ.ಬಿ.ಎ.ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಅಧ್ಯಯನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಹೊಂದಬೇಕಾದರೆ, ಉತ್ತಮ ಆರೋಗ್ಯ, ಒಳ್ಳೆಯ ನಡತೆ, ಸಂಸ್ಕಾರ, ಮಾನಸಿಕ ಆರೋಗ್ಯ, ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ಕೌಶಲ್ಯತೆಯನ್ನು ಹೊಂದಿರಬೇಕು ಎಂದು ಹೇಳಿದರು.
ಪ್ರಾಚಾರ್ಯ ಎ.ಪಿ.ಮುಲ್ಲಾ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸದಾಶಿವ ಘೋರ್ಪಡೆ, ಉಪನ್ಯಾಸಕರಾದ ಡಾ.ವಿವೇಕಾನಂದ ಮಾನೆ, ರಾಜಕುಮಾರ ಕಾಗೆ, ಅಜೀಜ ಸನದಿ, ಡಾ.ಪ್ರಸಾದ ಆರ್.ಎ, ಸಂತೋಷ ಸಮಾಜೆ, ಡಾ.ರವಿ.ಎಮ್.ವಿ, ಎಮ್.ಜಿ.ವಿಭೂತಿ, ಡಾ.ವಿಜಯಲಕ್ಷ್ಮೀ ಜಿ., ಎಮ್.ಎಸ್.ಯಾದವಾಡ, ಮಾರುತಿ ಹಾಡಕರ, ಜ್ಯೋತೆಪ್ಪ ಕಿಲ್ಲೇದಾರ, ರಾಜು ನಾವಿ, ಅನೀಲ ಮೊರೆ, ನಾಗರಾಜ ನಾಯಿಕ, ಅಶ್ವಿನ ಎಮ್., ಎಮ್.ಎಮ್.ಜಾಗನೂರ, ಉತ್ತಮ ಕಾಂಬಳೆ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ಡಾ.ಪವಿತ್ರಾ ಬಿ.ಕೆ ಸ್ವಾಗತಿಸಿದರು, ಎಸ್. ಎಮ್.ಐಹೊಳೆ ನಿರೂಪಿಸಿದರು.


,
,

















