| Latest Version 9.0.7 |

State News

ಶಿರ್ತಾಡಿ ಭುವನಜ್ಯೋತಿ ಲೀಗಲ್ ಸ್ಟಡೀಸ್ ರಾಷ್ಟ್ರೀಯ ಭದ್ರತೆಯ ಸ್ತಂಭಗಳಾಗಿ ವ್ಯಾಪಾರ ಮತ್ತು ವಾಣಿಜ್ಯದ ಪರಿವರ್ತನೆ ಕುರಿತು ವಿಚಾರಗೋಷ್ಠಿ

ಶಿರ್ತಾಡಿ :ಭುವನಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ತನ್ನ ಭುವನಜ್ಯೋತಿ ಇಂಕ್ಯುಬೇಶನ್ ಸೆಂಟರ್ ಆನ್ ನ್ಯಾಷನಲ್ ಸೆಕ್ಯುರಿಟಿ (BJICNS) ಮೂಲಕ, ಲಯನ್ಸ್ ಕ್ಲಬ್, ಕದ್ರಿ ಹಿಲ್ಸ್, ಮಂಗಳೂರು ಇವರ ಸಹಯೋಗದಲ್ಲಿ “ರಾಷ್ಟ್ರೀಯ ಭದ್ರತೆಯ ಸ್ತಂಭಗಳಾಗಿ ವ್ಯಾಪಾರ ಮತ್ತು ವಾಣಿಜ್ಯದ ಪರಿವರ್ತನೆ” ಎಂಬ ವಿಷಯದ ಮೇಲೆ ವಿಚಾರಗೋಷ್ಠಿಯನ್ನು ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಯಿತು.

ಈ ವಿಚಾರಗೋಷ್ಠಿಯ ಉದ್ದೇಶ ರಾಷ್ಟ್ರದ ಆರ್ಥಿಕ ಸ್ಥಿರತೆ ಮತ್ತು ಭದ್ರತೆಯಲ್ಲಿ ವ್ಯಾಪಾರ ಹಾಗೂ ವಾಣಿಜ್ಯದ ಪ್ರಮುಖ ಪಾತ್ರವನ್ನು ವಿಶ್ಲೇಷಿಸುವುದಾಗಿತ್ತು. ಕಾರ್ಯಕ್ರಮದಲ್ಲಿ ನಾಲ್ಕು ತಾಂತ್ರಿಕ ಅಧಿವೇಶನಗಳು ನಡೆದಿದ್ದು, ವಿವಿಧ ಕ್ಷೇತ್ರಗಳ ಗಣ್ಯ ತಜ್ಞರು ಅವುಗಳನ್ನು ನಡೆಸಿಕೊಟ್ಟರು.

ಪ್ರಥಮ ಅಧಿವೇಶನ – ವ್ಯಾಪಾರ ಮತ್ತು ವಾಣಿಜ್ಯದಲ್ಲಿನ ಭದ್ರತಾ ಅಪಾಯಗಳು ಕುರಿತು ಮಧುಸೂದನ ಭಟ್, ಸಹ ಆಯುಕ್ತರು, ಕಸ್ಟಮ್ಸ್ ಇಲಾಖೆ, ಮಂಗಳೂರು ಅವರು ಮಾತನಾಡಿ ವ್ಯಾಪಾರ ಕಾರ್ಯಾಚರಣೆಗಳ ಭದ್ರತೆಗಾಗಿ ಅಗತ್ಯವಾದ ತಂತ್ರಗಳನ್ನು ವಿವರಿಸಿದರು.

ದ್ವಿತೀಯ ಅಧಿವೇಶನ ನಿಯಾಮಕ ಚೌಕಟ್ಟು (Regulatory Framework) ಕುರಿತು ಅನ್ವೇಶ್ ಶೆಟ್ಟಿ, ಚಾರ್ಟರ್ಡ್ ಅಕೌಂಟೆಂಟ್, ಮಂಗಳೂರು ಅವರು ನಿಯಮ ಪಾಲನೆ ಮತ್ತು ಪಾರದರ್ಶಕತೆಯ ಅಗತ್ಯತೆಯನ್ನು ವಿವರಿಸಿದರು.

ತೃತೀಯ ಅಧಿವೇಶನ ಪ್ರಕರಣ ಅಧ್ಯಯನಗಳು ಮತ್ತು ಪಾಠಗಳು ಕುರಿತು ಡಾ. ಟಿ.ವಿ. ರಾಜೇಶ್, ಸೂಪರಿಂಟೆಂಡೆಂಟ್, ಕೇಂದ್ರ ತೆರಿಗೆ ಇಲಾಖೆ, ಬೆಂಗಳೂರು ಅವರು ತಮ್ಮ ಅನುಭವ ಮತ್ತು ನೀತಿ ಪಾಠಗಳನ್ನು ಹಂಚಿಕೊಂಡರು.

ಚತುರ್ಥ ಅಧಿವೇಶನ ವ್ಯಾಪಾರ ಅನುಸರಣೆ ಮತ್ತು ಅಪಾಯ ನಿರ್ವಹಣೆ ಕುರಿತು ಡಾ. ಯತೀಶ್ ಕುಮಾರ್, ಪ್ರಾಧ್ಯಾಪಕರು ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರು, ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಅವರು ಕಂಪನಿಗಳ ನೈತಿಕ ಹೊಣೆಗಾರಿಕೆ ಹಾಗೂ ಅಪಾಯ ನಿರ್ವಹಣೆಯ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಆಫ್‌ಲೈನ್‌ನಲ್ಲಿ 45 ಮಂದಿ ಹಾಗೂ ಆನ್‌ಲೈನ್‌ನಲ್ಲಿ 45 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಾನೂನು ಕಾಲೇಜುನ ಪ್ರಾಧ್ಯಾಪಕರು ಹಾಗೂ ವಿಧ್ಯಾರ್ಥಿಗಳು ಪಾಲ್ಗೊಂಡರು. ಕಾರ್ಯಕ್ರಮವನ್ನು ಭುವನಜ್ಯೋತಿ ಎಜ್ಯುಕೇಶನ್ ಟ್ರಸ್ಟ್‌ನ ಟ್ರಸ್ಟಿಗಳಾದ ರಾಘವೇಂದ್ರ ಪ್ರಭು (ಅಧ್ಯಕ್ಷರು), ಆರ್. ಪ್ರಶಾಂತ್ ಡಿ’ಸೋಜಾ (ಕಾರ್ಯದರ್ಶಿ), ಪ್ರಶಾಂತ್ ಎನ್.(ಸಂಚಾಲಕರು), ಶ್ರೀಮತಿ ಲತಾ ಎ. (ಖಜಾಂಚಿ) ಹಾಗೂ ಶರಣಪ್ಪ ಎಂ. ಭಾವಿ (ಸಲಹೆಗಾರರು) – ಉಪಸ್ಥಿತರಿದ್ದರು.
ಅಂತಿಮವಾಗಿ, ಡಾ. ಪ್ರದೀಪ್ ಎಂ.ಡಿ., ಪ್ರಾಂಶುಪಾಲರು, ಭುವನಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ವಂದಿಸಿದರು.
ಈ ವಿಚಾರಗೋಷ್ಠಿ ಶೈಕ್ಷಣಿಕ ಹಾಗೂ ಪ್ರಾಯೋಗಿಕ ಜ್ಞಾನವನ್ನು ಒಟ್ಟುಗೂಡಿಸಿದ ಮಹತ್ವದ ವೇದಿಕೆಯಾಗಿ ಕಾರ್ಯನಿರ್ವಹಿಸಿ, ರಾಷ್ಟ್ರೀಯ ಭದ್ರತೆಯ ಪ್ರಮುಖ ಸ್ತಂಭಗಳಾದ ವ್ಯಾಪಾರ ಮತ್ತು ವಾಣಿಜ್ಯದ ಅರಿವನ್ನು ವೃದ್ಧಿಪಡಿಸಿತು.

Team Udayaprabha
";