ಪುತ್ತೂರು: ನಗರಸಭೆ ವ್ಯಾಪ್ತಿ ಬಲ್ನಾಡು ಗ್ರಾಮದ ಭಂಡಾರದ ಮನೆ ಸಮೀಪದ ನಿವಾಸಿಯಾಗಿರುತ್ತೇವೆ. ಬಲ್ನಾಡು ಗ್ರಾಮಸ್ಥರಾದ. ಉಳ್ಳಾಳೆ ದೈವಸ್ಥಾನಕ್ಕೆ (ನಗರಸಭೆಯ ವತಿಯಿಂದ ) ಮತ್ತು, ಭಾಸ್ಕರ ಕಡವೆಡುಮನೆ, ಶ್ರೀಧರ ಗೌಡ ನಡುಮನೆ, ಲಕ್ಷ್ಮೀ ಪೂಜಾ ಬಾಳೆಹಿತ್ತು ಜಲಸಿರಿ ಯೋಜನೆಯಡಿಯಲ್ಲಿ ನೀರಿಗಾಗಿ ಅರ್ಜಿಸಲ್ಲಿಸಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಆರಂಭವಾಗಿ ಕಾಮಗಾರಿ ಅರ್ಧ ಹಂತಕ್ಕೆ ಬಂದಿರುತ್ತದೆ. ಕಾಮಗಾರಿ ಬಾಕಿ ಉಳಿದಿರುತ್ತದೆ. ಸುಮಾರು 100 ರಿಂದ 150 ಮೀ
ಬಾಕಿ ಉಳಿದ ಕಾಮಗಾರಿಯು ಭಂಡಾರದ ಮನೆ ಉಳ್ಳಾಲ್ತಿ ದೇವಸ್ಥಾನ ಬಲ್ನಾಡು ರಸ್ತೆಯಲ್ಲಿರುತ್ತದೆ ಈ ಬಗ್ಗೆ ಭಂಡಾರದ ರ ಜಾಗ ಬೇಕಾಗಿದ್ದು, ಆ ಜಾಗವು ಭಂಡಾರದ ಮನೆಯ ಕುಟುಂಬಸ್ಥರ ಅಧೀನದಲ್ಲಿರುತ್ತದೆ ಮನೆ ವಿಶ್ವನಾಥ ಗೌಡ ಅವರ ಬಳಿ ಅನುಮತಿಯನ್ನು ಕೇಳಿದ್ದು, ಅವರ ಸಹೋದರ, ಸಹೋದರಿಯವರ ಬಳಿ ಕೇಳಬೇಕೆಂದು ತಿಳಿಸಿರುತ್ತಾರೆ. ಆದರೆ ಅದರ ಸರಿಯಾದ ನಿರ್ಧಾರವನ್ನು ತಿಳಿಸಿರುವುದಿಲ್ಲ.
ಪುತ್ತೂರು ನಗರಸಭೆಯವರು ಸ್ಥಳಕ್ಕೆ ಬಂದು ಕೆಲಸ ಆರಂಭಿಸಿದ್ದಾಗ ಕಾಮಗಾರಿಗೆ ಅಡ್ಡಿ ಪಡಿಸಿರುತ್ತಾರೆ. ಪೈಪು ಲೈನು ಹಾದು ಹೊಗುವ ಮಾರ್ಗವು ಈಗಾಗಲೇ ಸರಕಾರದಿಂದ ಕಾಂಕ್ರೀಟಿಕರಣ ಆಗಿದ್ದು. ಅದರೆ ಸದರಿ ರಸ್ತೆಯ ಉಳ್ಳಾಲ್ತಿ ದೈವಸ್ಥಾನದ ಭಂಡಾರದ ಮನೆವರೆಗೆ ಈಗಾಗಲೇ ಬದಿಯಲ್ಲಿ ನೀರಿನ ಪೈಪು ಹಾದು ಹೊಗುವುದಾಗಿದೆ.
ಮನೆಯವರು ಕಾರಣದಿಂದಾಗಿ 7 ಅಕ್ಷೇಪಣೆ ಇದ್ದ ಜಲಸಿಲ ನೀರಿಗೆ ಅರ್ಜಿಯನ್ನು ಬೋಜರಾಜ ಗೌಡ, ಚಂದ್ರಶೇಖರ ಗೌಡ ಪೂಜಾರಿ ಬಾಳೆ ಹಿತ್ತು ,ವಸಂತ ಗೌಡ ಕಟ್ಟಿ ಹಾಕಿರುವುದಿಲ್ಲ. ನೀರಿನ ಲೈನು ಹಾದು ಹೋದಲ್ಲಿ ಜಗದೀಶ್ ಗೌಡ 4) ನವೀನಚಂದ್ರ ಗೌಡ 5)) ಮೋನಪ್ಪ ಮನೆ, 7) ಯಶೋಧ ಮೋಹನ ಗೌಡ ಕಟ್ಟ ಮನೆ, ಇವರ ಮನೆಗೂ ನೀಲನ ಸಂಪರ್ಕ ಬೇಕಾಗಿದೆ ಎಂದು
ತಿಳಿಸಿರುತ್ತಾರೆ. ತಡೆ ಹಿಡಿಯಲಾದ ಕಾಮಗಾರಿಗೆ ಚಾಲನೆ ನೀಡಿ ನೀರಿನ ಸಂಪರ್ಕ ಒದಗಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಮಾಡಾವು – ಸುಳ್ಯ 110 ಕೆ ವಿ ವಿದ್ಯುತ್ ಲೈನ್
ಅರಣ್ಯ ಪ್ರದೇಶದ ಮರ ತೆರವು ಮಾಡಿಸಿ: ಡಿಎಫ್ಒ ಗೆ ಶಾಸಕ ಅಶೋಕ್ ರೈ ಸೂಚನೆ
ಪುತ್ತೂರು: ಮಾಡಾವಿನಿಂದ ಸುಳ್ಯಕ್ಕೆ ಹಾದು ಹೋಗುವಲ್ಲಿ ಅರಣ್ಯ ವ್ಯಾಪ್ತಿಯಲ್ಲಿರುವ ಮರಗಳನ್ನು ತೆರವು ಮಾಡುವಲ್ಲಿ ಶೀಘ್ರಕ್ರ ಕೈಗೊಳ್ಳುವಂತೆ ಶಾಸಕ ಅಶೋಕ್ ರೈ ಅವರು ಡಿಎಫ್ಒ ಆಂಟನಿ ಮರಿಯಪ್ಪ ಅವರಿಗೆ ಸೂಚನೆ ನೀಡಿದರು.
110 ಕೆ ವಿ ಲೈನ್ ಗಳು ಕಣಿಯಾರ್ ಮಲೆ ಅರಣ್ಯ ಹಾಗೂ ಸುಳ್ಯದ ಒಂದು ಕಡೆ ಅರಣ್ಯದ ಮೂಲಕ ಹಾದು ಹೋಗುತ್ತಿದೆ. ಮರಗಳ ತೆರವುಮಾಡದ ಕಾರಣ ಲೈನ್ ಎಳೆಯಲು ಅಸಾಧ್ಯವಾಗಿದ್ದು ಈ ಕಾರಣಕ್ಕೆ ಕೆಲ ವರ್ಷದಿಂದ ಕಾಮಗಾರಿ ಪೆಂಡಿಂಗ್ ಆಗಿದೆ. ಈ ಹಿಂದೆ ಮರಗಳನ್ನು ತೆರವುಮಾಡುವಂತೆ ಆದೇಶ ಆಗಿದ್ದರೂ ಕನಿಷ್ಟ ಮರಗಳನ್ನು ತೆರವು ಮಾಡಿ ಎಂಬ ಸೂಚನೆ ಇದ್ದ ಕಾರಣ ಮೆಸ್ಕಾಂ ಮರಗಳ ತೆರವಿಗೆ ಮುಂದಾಗಿರಲಿಲ್ಲ. ಇದೀಗ ಶಾಸಕ ಅಶೋಕ್ ರೈ ಅವರಿಗೆ ಮೆಸ್ಕಾಂ ಅಧಿಕಾರಿಗಳು ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿದ್ದಾರೆ. ಡಿಎಫ್ ಒ ಅವರಿಗೆ ಕರೆ ಮಾಡಿದ ಶಾಸಕರು ವಿದ್ಯುತ್ ಲೈನ್ ಹಾದು ಹೋಗುವಲ್ಲಿ ಇಲಾಖೆ ಮೆಸ್ಕಾಂಗೆ ಸಹಕಾರ ನೀಡಬೇಕು. ಅರಣ್ಯ ಇಲಾಖೆಯ ಕಾರಣಕ್ಕೆ ತಡವಾಗಿದೆ ಎಂದು ತಿಳಿಸಿದ ಶಾಸಕರು ಈ ಬಗ್ಗೆ ಕ್ರಮಕೈಗೊಳ್ಳಿ ಎಂದು ಸೂಚಿಸಿದರು. ಶಾಸಕರ ಸೂಚನೆಯಂತೆ ಮರ ಕಡಿಯಲು ಇಲಾಖೆ ಮೆಸ್ಕಾಂಗೆ ಅನುಮತಿ ನೀಡಿ ನಿರ್ದೇಶಿಸಿದೆ


,
,

















