ನವದೆಹಲಿ: ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ನೂತನ ಮುಖ್ಯಸ್ಥರಾಗಿ ದಿಗ್ಗಜ ಆಟಗಾರ ವಿವಿಎಸ್ ಲಕ್ಷಣ್ ನೇಮಕಗೊಳ್ಳುವ ಸಾಧ್ಯತೆಯಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.
ಅವರ ಕಳೆದ 3 ವರ್ಷಗಳಿಂದ ಅಜಿತ್ ಅಗರ್ಕರ್ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಒಪ್ಪಂದ ಜೂನ್ನಲ್ಲಿ ಮುಕ್ತಾಯ ಗೊಳ್ಳಬೇಕಿತ್ತು. ಆದರೆ ಅವರಿಗೆ ಬಿಸಿಸಿಐ 3 ತಿಂಗಳ ವಿಸ್ತರಣೆ ಯನ್ನು ನೀಡಿತ್ತು. 2027ರ ಏಕದಿನ ವಿಶ್ವಕಪ್ವರೆಗೆ ಅವರಿಗೆ ಮತ್ತೊಂದು ಅವಧಿಗೆ ವಿಸ್ತರಣೆ ಸಿಗಬಹುದು ಮತ್ತು ಅವರು ಹುದ್ದೆಯಲ್ಲಿ ಮುಂದುವರಿ ಯಲಿದ್ದಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಇತ್ತೀಚಿನ ಕೆಲವು ಬೆಳವಣಿಗೆಗಳು ಆ ಸಾಧ್ಯತೆ ಯನ್ನು ಕುಗ್ಗಿಸಿದ್ದು, ಅವರ ಅಧಿಕಾರಾವಧಿಯು ಒಂದು ತಿಂಗಳಲ್ಲಿ ಕೊನೆಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಅವರ ಸ್ಥಾನಕ್ಕೆ, ಪ್ರಸ್ತುತ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಅವ ರನು ನಿಯೋಜಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಸೆಪ್ಟೆಂಬರ್ನಲ್ಲಿ ಅಂತಿಮ ತೀರ್ಮಾನ ಹೊರಬೀಳುವ ನಿರೀಕ್ಷೆಯಿದೆ.


,


















