| Latest Version 9.0.7 |

Local News

ಯುವಜನತೆ ಪಠ್ಯ ಮತ್ತು ಪಠ್ಯೇತರ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ವ್ಯಕ್ತಿತ್ವ ರೂಪಿಸಿಕೊಳ್ಳಿ : ಕುಲಪತಿ ತ್ಯಾಗರಾಜ

 

 

 

 

ಬೆಳಗಾವಿ: ನಗರದ ಕೆಎಲ್ಇ. ಸಂಸ್ಥೆಯ, ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದ ಸರ್ ಸಿ ವಿ ರಾಮನ್ ಸಭಾಂಗಣದಲ್ಲಿ ಗುರುವಾರ 2026- 27ನೇ ಸಾಲಿನ ಕ್ರೀಡಾ ಮತ್ತು ವಿವಿಧ ಸಂಘ ಚಟುವಟಿಕೆಗಳ ಕಾರ್ಯಕ್ರಮ ನಡೆಯಿತು.

 

ರಾಣಿ ಚನ್ನಮ್ಮ ವಿವಿ ಕುಲಪತಿ ಸಿ.ಎಂ.ತ್ಯಾಗರಾಜ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸತತವಾಗಿ ಅಧ್ಯಯನ ಮಾಡಿದರೆ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ.

ವಿದ್ಯಾರ್ಥಿಗಳು ಹೊರಗಿನಿಂದ ಬೆಳೆಯದೆ ಒಳಗಿನಿಂದ ಬೆಳೆಯಬೇಕು. ಉತ್ತರ ಕರ್ನಾಟಕದಲ್ಲಿ ಕೆ ಎಲ್ ಇ ಸಂಸ್ಥೆ ಶೈಕ್ಷಣಿಕ ಕ್ರಾಂತಿ ಮಾಡಿದೆ. ವಿಜ್ಞಾನ ವಿದ್ಯಾರ್ಥಿಗಳು ವಿಜ್ಞಾನಿಗಳು ಬಗ್ಗೆ ಪರಿಚಯ ಮಾಡಿ ಕೊಳ್ಳಬೇಕು.ಜ್ಞಾನಯೋಗ ನಂತರ ಸ್ನಾತಕೋತ್ತರ ಜ್ಞಾನ ಅಧ್ಯಯನ ಮಾಡಬೇಕು. ಜ್ಞಾನದ ಕೌಶಲ್ಯ ಅಭಿವೃದ್ಧಿ ಹೊಂದಿಬೇಕು. ಮನಸ್ಸು ಬೆಳಸತಕ್ಕ ಕಾರ್ಯವಾಗಬೇಕು.

ಯುವಕರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು.ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ತಪಸ್ಸು ಮಾಡಬೇಕು. ವಿಜ್ಞಾನ ಮೂಲ ಉದ್ದೇಶ ಪರಿಸರ ಸಂರಕ್ಷಣೆ ಅಧ್ಯಯನ ಮಾಡಬೇಕು. ಓದುವ ಪ್ರೀತಿ ಯನ್ನು ಬೆಳಗಿಸಿ ಕೊಳ್ಳಬೇಕು. ಜ್ಞಾನ ಯೋಗದ ಜೊತೆಗೆ ಕರ್ಮಯೋಗ ಅವಶ್ಯಕತೆ ಇರಬೇಕು. ಯುವಕರಲ್ಲಿ ಶಿಸ್ತು, ಸಂಯಮ ,ಕಾಯಕ ಸಂಸ್ಕೃತಿ ಇರಬೇಕು.

ಸ್ಪರ್ಧಾತ್ಮಕ ಯುಗದಲ್ಲಿ ಯಾವಾಗಲೂ ಸಿದ್ದರಾಗಬೇಕು.

ವಿಜ್ಞಾನ ತಂತ್ರಜ್ಞಾನ ಅಧ್ಯಯನ ಕೌಶಲ್ಯಗಳನ್ನು ಹೊಂದಬೇಕು.

ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸ ಮಾಡಬೇಕು.ರಾಜಯೋಗ ಹೊಂದಬೇಕು.

ದೈಹಿಕ ಹಾಗೂ ಮಾನಸಿಕ ಸದೃಢವಾಗಿರಬೇಕು. ಕಾಲೇಜಿನಲ್ಲಿ ವಿದ್ಯಾರ್ಥಿಗಳು ವ್ಯಸನ ಮುಕ್ತವಾಗಿರಬೇಕು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಪರಿಪೂರ್ಣ ಜೀವನ ರೂಪಿಸಿ ಕೊಳ್ಳಬೇಕು. ಯುವಕರು ಭಕ್ತಿ ಯೋಗದ ಮೌಲ್ಯಗಳನ್ನು ಹೊಂದಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

 

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಲಿಂಗೌಡ ವಿ ದೇಸಾಯಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಕ್ಷಣ ಜೊತೆಗೆ ಆಧ್ಯಾತ್ಮಿಕ ಮೌಲ್ಯಗಳನ್ನು ಹೊಂದಬೇಕು. ಆದರ್ಶ ತತ್ವಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕೆಂದು ಕಿವಿಮಾತು ಹೇಳಿದರು.

 

ಸೋನಾಲಿ ಪ್ರಾರ್ಥಿಸಿದರು.

ಪ್ರಾಂಶುಪಾಲೆ ಡಾ. ಜ್ಯೋತಿ ಎಸ್ ಕವಳೇಕರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಎಚ್. ಎನ್. ಬನ್ನೂರ ಪರಿಚಯಿಸಿದರು. ಡಾ. ವಿನಯಕುಮಾರ ಎಂ. ವಂದಿಸಿದರು. ಪ್ರೊ. ಮಹಾದೇವಿ ಹುಣಸಿಬೀಜ ಹಾಗೂ ಪ್ರೊ. ಪೂಜಾ ಮೆಳವಂಕಿ ನಿರೂಪಿಸಿದರು.

ಕಾಲೇಜಿನ ದೈಹಿಕ ನಿರ್ದೇಶಕ ಡಾ. ಶಿವಾನಂದ ಬುಲಬುಲಿ,

ಎನ್ ಎಸ್ ಎಸ್ ಅಧಿಕಾರಿ ಪ್ರೊ. ಎಸ್. ಬಿ.ತಾರದಾಳೆ ಮತ್ತು ಎಲ್ಲಾ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Team Udayaprabha
";